Quantcast
Channel: Vishwa Samvada Kendra – Vishwa Samvada Kendra
Viewing all articles
Browse latest Browse all 1926

ಕೋಲಾರದಲ್ಲಿ ವಿಶೇಷ ಚೇತನ ಮಕ್ಕಳ ಜೊತೆ ರಕ್ಷಾ ಬಂಧನ

$
0
0

12 ಆಗಸ್ಟ್ 2019, ಕೋಲಾರ: ಜಿಲ್ಲೆಯ ಅಂತರಗಂಗೆಯಲ್ಲಿನ ದಿವ್ಯಾಂಗ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಸಹೋದರತೆಯನ್ನು ಸಾರುವ ರಕ್ಷಾಬಂಧನ ಕಾರ್ಯಕ್ರಮವನ್ನು ದಿವ್ಯಾಂಗ ಮಕ್ಕಳೊಂದಿಗೆ ಆಚರಿಸಿತು.
ವಿಶೇಷ ಚೇತನರ ಸಂಘಟನೆ ‘ಸಕ್ಷಮ’ದ ಸಂಘಟನಾ ಕಾರ್ಯದರ್ಶಿ ಶ್ರೀ ಜಯರಾಮ ಬೊಳ್ಳಾಜೆ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿವ್ಯಾಂಗ ಮಕ್ಕಳು , ಪೋಷಕರು ಹಾಗೂ ದಿವ್ಯಾಂಗ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ರಾಷ್ಟ್ರೀಯ ಸಹೋದರತೆಯ ರಕ್ಷೆಯನ್ನು ಕಟ್ಟಿ ನಾವು ಈ ರಾಷ್ಟ್ರದ ತಾಯಿ ಭಾರತಿಯ ಮಕ್ಕಳು. ಸಹೋದರ ಭಾವದಿಂದ ಬದುಕೋಣ ಎಂಬ ಸಂದೇಶವನ್ನು ನೀಡಿದರು ಹಾಗೂ ವಿಶೇಷ ಚೇತನ (ದಿವ್ಯಾಂಗ) ಮಕ್ಕಳು ಸಹ ನಮ್ಮ ಹಿಂದು ಸಮಾಜದ ಅವಿಭಾಜ್ಯ ಅಂಗವೆಂಬುವದನ್ನು ಹಿಂದು ಸಮಾಜ ನೆನಪಿನಲ್ಲಿಡಬೇಕು ಎಂಬ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸಿದರು.


Viewing all articles
Browse latest Browse all 1926

Trending Articles



<script src="https://jsc.adskeeper.com/r/s/rssing.com.1596347.js" async> </script>